Slide
Slide
Slide
previous arrow
next arrow

ಹಾಲಿನ ವಾಹನ, ಬೈಕ್ ನಡುವೆ ಅಪಘಾತ: ಗಂಭೀರ ಗಾಯಗೊಂಡ ಬೈಕ್ ಸವಾರ

300x250 AD

ಭಟ್ಕಳ:ತಾಲೂಕಿನ ಸಬ್ಬತ್ತಿ ಬಳಿ ಹಾಲಿನ ವಾಹನ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಬೈಕ್ ಸವಾರನನ್ನು ಕೇರಳದ ಕಾಸರಗೋಡಿನ ನಿವಾಸಿ ರಾಜೇಶ ನಾವೂಡ ಎಂದು ಗುರುತಿಸಲಾಗಿದ್ದು ಈತ ಸಾಗರ ಕಡೆಯಿಂದ ಭಟ್ಕಳ ಕಡೆ ಬರುತ್ತಿದ್ದ ಸಮಯದಲ್ಲಿ ಭಟ್ಕಳ ಕಡೆಯಿಂದ ಮಾರುಕೇರಿ ಕಡೆಗೆ ಹಾಲು ಸರಬರಾಜು ಮಾಡಲು ಬರುತ್ತಿದ್ದ ವಾಹನದ ನಡುವೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

300x250 AD

ಘಟನೆಯಲ್ಲಿ ಬೈಕ್ ಸವಾರನ ಕುತ್ತಿಗೆಯ ಭಾಗದಲ್ಲಿ ಗಂಭೀರವಾದ ಗಾಯಗಳಾಗಿದ್ದು, ಈತನನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಸಾಗಿಲಾಗಿದೆ ವರದಿಯಾಗಿದೆ

Share This
300x250 AD
300x250 AD
300x250 AD
Back to top